Tuesday 6 August 2013

ಅಪ್ಸರೆ

ನನಗಾಗಿಯೇ ಧರೆಗಿಳಿದ ಅಪ್ಸರೆ ನೀ,
ನಿನಾಗಿಗೆಯೇ ಕಾದಿರುವನು ಈ ಸೇನಾನಿ.

ಸಹಸ್ರ ವಜ್ರಗಳು ಒಟ್ಟಿಗೇ ಪ್ರಜ್ವಲಿಸಿದಂತೆ ನಗುವ ಚಕೋರಿ,
ಗಂಗಾ ಕಾವೇರಿಯರು ಉಕ್ಕಿ ಹರಿದಂತೆ ಅಳುವ ಸಿಂಗಾರಿ.

ರವಿವರ್ಮನ ಕುಂಚವೇ ಜಾರುವಂತ ಮೈಕಾಂತಿಯ ಕೋಮಲೆ,
ಕಾಳಿದಾಸನ ವರ್ಣನೆಗೂ ನಿಲುಕದ ಬೆಳದಿಂಗಳ ಬಾಲೆ.

ಕೋಟಿ ಕೋರಿಕೆಗಳು ಈಡೇರಿದಂತೆ ಎದುರು ನಿಂತರೆ ನನ್ನ ಪಾವನಿ,
ನಿನ್ನ ಒಂದೊಂದು ಸ್ಪರ್ಶವೂ ಸತ್ತವನನ್ನೂ ಬದುಕಿಸುವ ಸಂಜೀವಿನಿ. 

ನನಗಾಗಿಯೇ ಧರೆಗಿಳಿದ ಅಪ್ಸರೆ ನೀ,
ನಿನಾಗಿಗೆಯೇ ಕಾದಿರುವನು ಈ ಸೇನಾನಿ. 

-
ಹರ್ಷ ಹೆಮ್ಮಾಡಿ.

No comments:

Post a Comment