Tuesday 6 August 2013

ಜೀವನ

ಜೀವನದಲ್ಲಿ ಎಲ್ಲವೂ ಕ್ಷಣಿಕ, ನಿನ್ನಲ್ಲಿರುವ ಹಣ, ಸಮಯ, ಸಂಬಂಧ ನೆಪ ಮಾತ್ರ,
ಕೊನೆಗುಳಿಯುವುದು ನಿನಗೆ, ನೀ ಮತ್ತು ಅದುವರೆಗು ಕಳೆದ ನೆನಪು ಮಾತ್ರ.

ಸಮಸ್ಯೆಗಳು ಬಂದಾಗ ಬದುಕುವುದೇ ಕಷ್ಟವೆಂದರೆ ಅದು ಮಹಾ ತಪ್ಪು,
ಸಮಸ್ಯೆಗಳನ್ನು ಸರಿದೂಗಿಸಿಕೊಂಡು ಬದುಕುವುದೇ ಜೀವನವೆಂಬುದ ನೀ ಒಪ್ಪು.

ಇಲ್ಲಿ ಬಡವನು ಮಾತ್ರವಲ್ಲ ಶ್ರೀಮಂತನೂ ಕೂಡ ಸಮಸ್ಯೆಗಳನ್ನು ಹೊಂದಿರುತ್ತಾನೆ,
ಪ್ರತಿಯೊಬ್ಬನೂ ಸಮಸ್ಯೆಯ ಹುಟ್ಟನ್ನು ತಿಳಿದರೆ ಮಾತ್ರ ಬುದ್ಧಿವಂತರ ಸಾಲಿನಲ್ಲಿ ನಿಲ್ಲುತ್ತಾನೆ.

ಮೇಲಿರುವವನು ಸಮಸ್ಯೆಗಳ ಬೀಜಗಳನ್ನು ಬಿತ್ತಿ ಆಡಿಸುತ್ತಾನೆ ಎನ್ನುವವನು ಆಸ್ತಿಕ,
ಮೇಲ್ಯಾರೂ ಇಲ್ಲ ನನ್ನ ಸಮಸ್ಯೆಗಳಿಗೆ ನಾನೇ ಕಾರಣ ಎನ್ನುವವನು ನಾಸ್ತಿಕ.

ಆಸ್ತಿಕನೋ ನಾಸ್ತಿಕನೋ ಸಮಸ್ಯೆಗಳಿಗೆ ಹೆದರಿದರೆ ನೀ ಇಲಿ,
ಬಡವನೋ ಶ್ರೀಮಂತನೋ ಸಮಸ್ಯೆಗಳಿಗೇ ಹೆದರಿಸಿದರೆ ನೀ ಹುಲಿ.

ಜೀವನದಲ್ಲಿ ಎಲ್ಲವೂ ಕ್ಷಣಿಕ, ನಿನ್ನಲ್ಲಿರುವ ಹಣ, ಸಮಯ, ಸಂಬಂಧ ನೆಪ ಮಾತ್ರ,
ಕೊನೆಗುಳಿಯುವುದು ನಿನಗೆ, ನೀ ಮತ್ತು ಅದುವರೆಗು ಕಳೆದ ನೆನಪು ಮಾತ್ರ.

-
ಹರ್ಷ ಹೆಮ್ಮಾಡಿ.

No comments:

Post a Comment