Tuesday 6 August 2013

ಗೋ ಕಳ್ಳಸಾಗಾಣಿಕೆ

ಕರಾವಳಿಯಲ್ಲಿ ಹೆಚ್ಚುತ್ತಿದೆ ಗೋ ಕಳ್ಳಸಾಗಾಣಿಕೆ,
ಇದರಿಂದ ಭದ್ರತೆ ಕಳೆದುಕೊಂಡಿದೆ ಹೈನುಗಾರಿಕೆ. 

ತಿಳಿಯುತ್ತಿಲ್ಲ ನಮಗೆ ಇದೇನು ಆಡಳಿತ ವರ್ಗದ ಅತಂತ್ರವೋ,
ಇಲ್ಲ ಸರ್ಕಾರ ಬೀಳಿಸಲು ವಿರೋಧಿಗಳು ನಡೆಸುತ್ತಿರುವ ಕುತಂತ್ರವೋ. 

ಒಂದಂತೂ ನಿಜ ಮನುಷ್ಯ ಆಗುತ್ತಿದ್ದಾನೆ ತುಂಬಾ ಕ್ರೂರಿ,
ಬೆಳೆಯುತ್ತಿದ್ದಾನೆ ಮಾನವೀಯ ಮೌಲ್ಯಗಳನ್ನು ಮೀರಿ. 

ಯಾಕೋ ಮಾನವ ನಿನಗೆ ನೀನೊಬ್ಬನೆ ಬದುಕಬೇಕೆಂಬ ಸ್ವಾರ್ಥ,
ನಿನ್ನಂತೆಯೇ ಎಲ್ಲವೂ ಜೀವಿಗಳೆ ಎನ್ನುವುದನ್ನ ಮಾಡಿಕೊ ಅರ್ಥ. 


- ಹರ್ಷ ಹೆಮ್ಮಾಡಿ. 

No comments:

Post a Comment