ಮೊನ್ನೆ ಬಂತು ಉತ್ತರಖಾಂಡ್ನಲ್ಲಿ ನೆರೆ,
ತಾಳಲಾರದೆ ಭೂತಾಯಿಗೆ ಸಾಲು ಸಾಲು ಕಟ್ಟಡಗಳ ಹೊರೆ.
ಹೇ ಮನುಜ ಇನ್ನಾದರೂ ನೀ ಕಣ್ಣು ತೆರೆ,
ಮರ ಕಡಿಯುವುದನ್ನು ತೊರೆದು ಮೆರೆ.
ಹಸಿರು ಬೆಳೆಸಲು ಇನ್ನಷ್ಟು ಬರಬೇಕಿದೆ ಕರೆ,
ಆದಾಗ ಮಾತ್ರ ತಪ್ಪಿಸಬಹುದು ಇಂತಹ ವಿಪತ್ತಿನ ಬರೆ.
- ಹರ್ಷ ಹೆಮ್ಮಾಡಿ.
No comments:
Post a Comment