Monday 26 August 2013

ರಾಜಕೀಯ

ಸುದ್ದಿಯಾಗುವುದು ನಿಜ, ಮಂತ್ರಿಯಾದಮೇಲೆ ಮಾಡಿದರೂ ಮಾಡದಿದ್ದರೂ ಆತ ಅವನ ಕಾಯಕ.
ಮೊನ್ನೆಯಿಂದೀಚೆಗೆ ಆ ಪಕ್ಷದ ಮಂತ್ರಿಯ ಕಾಲೆಳೆಯಲು ಹೋಗಿ, ಈ ಪಕ್ಷದವರೇ ಪರೋಕ್ಷವಾಗಿ ಮಾಡುತ್ತಿರುವುದು ಸುಳ್ಳಲ್ಲ ಕೇಂದ್ರದ ಭಾವಿ ನಾಯಕ. 

ನಾವು ಮತಹಾಕುವುದಿವರಿಗೆ ಆಗಬಹುದೆಂದು ನಮ್ಮೆಲ್ಲರ ರಕ್ಷಕ.
ರಕ್ಷಕ ಆಗುವುದಿರಲಿ ನಮ್ಮ ದೇಶದ ಈಗಿನ ಆರ್ಥಿಕ ಪರಿಸ್ಥಿತಿಯೇ ಸಾರಿ ಹೇಳುತ್ತಿದೆ, ಇವರಾಗಿದ್ದಾರೆ ಕಂತೆ ಕಂತೆಗಳ ಭಕ್ಷಕ. 

ಆ ಕಡೆ ಈ ಕಡೆ ನೋಡಿ, ದಿನವೂ ಇವರ ಕಚ್ಚಾಟ ಕೇಳಿ, ಜನಸಾಮಾನ್ಯ ಆಗುತಿದ್ದಾನೆ ಮೂಕಪ್ರೇಕ್ಷಕ.
ಎಷ್ಟು ತಲೆಕೆಡಿಸಿಕೊಂಡರೂ ನನಗೆ ಮೂಡುವ ಪ್ರಶ್ನೆಯೊಂದೇ, ನೋಡುತ್ತಿದ್ದಾನೆಯೇ ಇಲ್ಲವೇ ಇದನ್ನೆಲ್ಲಾ ಮೇಲಿರುವ ಪರೀಕ್ಷಕ. 

- ಹರ್ಷ ಹೆಮ್ಮಾಡಿ.

No comments:

Post a Comment