ಅಪ್ಸರೆಯರ ಗುಂಪಲ್ಲಿ ಕಪ್ಪು
ಸೀರೆಯುಟ್ಟವಳ್ಮೇಲೆ ನನಗಾಯ್ತು ಪ್ರೇಮ,
ಕೃಷ್ಣನಾಗಿದ್ದವನು
ನಾನದೆ ಅವಳಿಗೋಸ್ಕರ ರಾಮ.
ಅಂದಗಾತಿ ನೀ ನನ್ನ ಹೃದಯ
ಮಂದಿರದಲ್ಲಿ ನೆಲೆಸಿರುವ ದೈವ,
ಪೂಜಾರಿ ನಾ ನಿನ್ನ
ಪ್ರೆಮಪೂಜೆಗೆ ಕಾದಿರುವೆ ಅಣಿಗೊಳಿಸಿ ಪ್ರೀತಿ ಹೂವ.
ಸುಕೋಮಲೆ ಗೊಂದಲವಾಗಿದೆ ನನಗೆ
ನನ್ನನ್ನೇ ನಾ ನಂಬಲಾ,
ಯಾರೊಂದಿಗೂ ಜಾಸ್ತಿ
ಮಾತಾಡದವನಿಗೆ ಇಂದು ತುಂಬಾ ಮಾತಾಡುವ ಹಂಬಲ.
ಅಪರೂಪದ ಬಯಕೆಗಳು ಜಾಸ್ತಿ
ಮಾಡುತ್ತಿವೆ ವಿರಹ,
ನಾ ಬಳಲಿ ಬೀಳುವ ಮೊದಲು ನೀ
ಬರಬಹುದೇ ಸನಿಹ.
- ಹರ್ಷ ಹೆಮ್ಮಾಡಿ.
No comments:
Post a Comment