Monday 19 August 2013

ಬದುಕು

ನಿನ್ನಿಷ್ಟದಂತೆ ನೀ ಬದುಕು ಪ್ರತಿದಿನ,
ಚೌಕಟ್ಟುಗಳಿಂದ್ಯಾಕೆ ಹಾಳುಮಾಡಿಕೊಳ್ಳಬೇಕು ನಮಗಿರುವ ಸುದಿನ.

ಬದುಕುವುದು ಮೂರು ದಿನ ಅದಕ್ಕ್ಯಾಕೆ ನೂರು ವಿಧಾನ,
ಆದರೆ ನ್ಯಾಯದೆಡೆಗೆ ಲಕ್ಷ್ಯವಿರಲಿ ಪ್ರಧಾನ.

ಸುಳ್ಳು ಸೆರಗಿನಲ್ಲಿ ಬಚ್ಚಿಟ್ಟ ಬಸಿರಿನಂತೆ,
ಮುಚ್ಚಿಟ್ಟರೆ ತಪ್ಪಿದ್ದಲ್ಲ ಹೊರಬರುವುದೆಂಬ  ಚಿಂತೆ.

ತಪ್ಪೆಂದು ಕಂಡರೆ ನಿನ್ನನ್ನೇ ನೀ ತದುಕು,
ಕಪಟದ ಗೊಡವೆಯಿಲ್ಲದೆ ನೆಮ್ಮದಿಯಿಂದ ಬದುಕು.


- ಹರ್ಷ ಹೆಮ್ಮಾಡಿ.

No comments:

Post a Comment