Monday 12 August 2013

ನಾಗರಪಂಚಮಿ

ಸಮಸ್ತ ಕುಲಕೋಟಿಗೆ ನಾಗರಪಂಚಮಿಯ ಶುಭಾಶಯ,
ಈ ಶುಭಾಶಯದೊಂದಿಗೆ ನನ್ನದೊಂದು ಕಿರು ಆಶಯ.

ಪೈಪೋಟಿಯಲ್ಲಿ ಹುತ್ತದ ತುಂಬೆಲ್ಲಾ ಎರೆದು ಹಾಲು,
ದಯಮಾಡಿ ಮಾಡಬೇಡಿ ಹಾಲನ್ನು ಮಣ್ಣುಪಾಲು.

ಇದರಿಂದ ನಾಗನಿಗೂ ಇನ್ನುಳಿದ ಸಣ್ಣ ಜೀವಿಗಳಿಗೂ ಮಲಗಲು ಕಷ್ಟ,
ಹಸಿದವರಿಗೆ ದಾನ ಮಾಡಿ ನಾಗನಿಗೂ ಆಗುವುದು ಇಷ್ಟ.


ಎಲ್ಲರೂ ಸ್ವಾರ್ಥ ಬಿಟ್ಟು ಶುಭ್ರ ಮನಸ್ಸಿನಿಂದ ಸ್ಮರಿಸಿ,
ಸಲಹುವನು ಅವನು ನಿಮ್ಮೆಲ್ಲಾ ಕೋರಿಕೆಗಳನ್ನು ಈಡೇರಿಸಿ.

-
ಹರ್ಷ ಹೆಮ್ಮಾಡಿ.

No comments:

Post a Comment