ದಿನನಿತ್ಯ
ಸತ್ತು ಬದುಕಿ ಅಳುತ್ತಿರುವವರಿವರು,
ಸತ್ತಂತೆ
ಬದುಕಿ ನಮ್ಮನ್ನು ಆಳುತ್ತಿರುವವರವರು.
ಬಸ್ ನಿಲ್ದಾಣ,ರಸ್ತೆ ಬದಿಯೇ ಇವರಿಗೆ ಮಹಲು,
ಕೇಳಿಸಿದರೂ
ಕೇಳದಂತಿದ್ದಾರೆ ಆಳುವವರಿವರಳಲು.
ಬಹುಶಃ ಇಂಥವರು
ಸರ್ಕಾರದ ಗಣತಿಗೂ ಸಿಗರು,
ಯಾಕೆಂದರೆ
ಇವರು ಯಾವ ಗುರುತುಪತ್ರ ಹೊಂದಿರರು.
ಯಾವ ಸರ್ಕಾರ
ಏನೇನೋ ಸಾಧಿಸಿದರೇನು ಪ್ರಯೋಜನ,
ಮೂಲಭೂತ ಸೌಕರ್ಯವನ್ನೇ
ಪಡೆಯದಮೇಲೆ ಎಲ್ಲಾ ಜನ.
- ಹರ್ಷ ಹೆಮ್ಮಾಡಿ.