ಹೆಚ್ಚು ಕಮ್ಮಿ ಎಲ್ಲಾ
ಮನುಷ್ಯ ಇಲ್ಲಿ ಭಾವನೆಗಳಿಗೆ ಬಣ್ಣ ಹಚ್ಚಿ ಬದುಕುತ್ತಿರುವವನು,
ದೇವರ ಸೃಷ್ಟಿಯೇ ವಿಚಿತ್ರ
ಅನಿಸುವಂತದ್ದು ಕೊಟ್ಟು ಕಸಿದು ನಮ್ಮನ್ನು ಆಡಿಸುವನು.
ಹೊಟ್ಟೆ ತುಂಬಿದವನು
ತಿನ್ನುತ್ತಲೇ ಕುಳಿತಿದ್ದಾನೆ,
ಹಸಿದ ಹೊಟ್ಟೆಯಲ್ಲಿರುವವನು
ಹಸಿದುಕೊಂಡೇ ಮಲಗಿದ್ದಾನೆ.
ಕೇಳುತ್ತಿಲ್ಲವೇ ದೇವರಿಗೆ
ಹಸಿದವನ ಹವಣಿಕೆ,
ಅವನಿರುವುದೇ ಹೌದಾದರೆ ಈ
ತಾರತಮ್ಯ ಯಾಕೆ.
ಪುರಾಣ ಹೇಳುತ್ತದೆ ಪಾಪ
ಹೆಚ್ಚಾದರೆ ಭಗವಂತ ಅವತರಿಸುತ್ತಾನೆ ಕೊಡಿಸಲು ನ್ಯಾಯ,
ಇನ್ನೂ ಯಾಕೆ ಅವತರಿಸಿಲ್ಲ
ಬಹುಶಃ ಭಗವಂತನಿಗೂ ಕಾಡುತ್ತಿರುವುದೇ ಪಾಪಿಗಳ ಭಯ.
- ಹರ್ಷ ಹೆಮ್ಮಾಡಿ.
No comments:
Post a Comment