Saturday 28 September 2013

ಕ್ಷಮೆ

ನನ್ನವಳ ಮುನಿಸಿನ ಕೋಟೆಯೊಳಗೂ ನನ್ನ ಮೇಲೆ ಪ್ರೀತಿಯಿತ್ತು,
ಕೋಟೆಯೊಳಹೊಕ್ಕರೆ ರಾಶಿ ರಾಶಿ ಮುತ್ತಿನ ಮೂಟೆಯಿತ್ತು.

ಕೆಲವುದಿನಗಳಿಂದ ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಿದ್ದೆವು ನೀ ದೂರ ಹೋಗು,
ನಿಜ ಹೇಳಬೇಕೆಂದರೆ ಇಬ್ಬರಿಗೂ ನಿದ್ದೆ ಬರಲ್ಲ ಆಗದೇ ಕರೆಸಂದೇಶಗಳ ಕೂಗು.

ಇಬ್ಬರಿಗೂ ಸ್ವಾಭಿಮಾನ ಯಾವುದೋ ಒಂದು ಸಣ್ಣ ವಿಷಯಕ್ಕೆ ಮನಸ್ತಾಪ,
ಸ್ವಾಭಿಮಾನ ದುರಾಭಿಮಾನವಾಗದಿರಲೆಂದು ನಾನೇ ಮಾಡಿದೆ ಕ್ಷಮೆಯ ಪ್ರಸ್ತಾಪ.

ಮನಸ್ಫೂರ್ತಿಯಾಗಿ ಅವಳಿಗೋಸ್ಕರ ಸೋಲುವುದರಲ್ಲೂ ಒಂದು ಖುಷಿಯಿತ್ತು,
ಕ್ಷಮಿಸೆಂದ ಮರುಕ್ಷಣವೇ ನನ್ನ ಪ್ರೀತಿ ಬಂದು ಗಟ್ಟಿಯಾಗಿ ನನ್ನ ತಬ್ಬಿತ್ತು.


-ಹರ್ಷ ಹೆಮ್ಮಾಡಿ.

No comments:

Post a Comment