ನಿನ್ನ ಹೃದಯವೇ
ನನ್ನಿಂದ ಘಾಸಿಯಾದಮೇಲೆ ಹೇಳಲೇನುಳಿದಿದೆ ಗೆಳತಿ,
ಯಾವ ನಿಯಮದಡಿ
ಶಿಕ್ಷೆ ಕೊಟ್ಟರೂ ಈ ಪಾಪಕ್ಕಿಲ್ಲ ಮುಕುತಿ.
ಮುಂಗೋಪಿ
ನಾ ಮನಬಂದಂತೆ ನಿನ್ನ ಬೈದೆ,
ನೀ ಮರುಮಾತನಾಡದೆ
ಬರೀ ಮೌನದಲ್ಲೇ ನನ್ನ ಕೊಂದೆ.
ಅಪೇಕ್ಷಿಸದೇ
ಬಂದೆ ನೀ ನನ್ನ ಬಾಳಲ್ಲಿ,
ಇಷ್ಟವಾದಮೇಲೆ
ಸಿಗದೇ ಹೋದೆ ನೀ ನನ್ನ ತೋಳಲ್ಲಿ.
ಇಂದು ನಿನ್ನ
ಮೃದು ಮಧುರ ಮಾತುಗಳು ಬರೀ ನೆನಪು ಮಾತ್ರ,
ತಿಳಿಯುತ್ತಿಲ್ಲ
ಗೆಳತಿ ಹೇಳಲೀ ನನ್ನೀ ನೋವುಗಳನ್ನು ಯಾರ ಹತ್ತಿರ.
-ಹರ್ಷ ಹೆಮ್ಮಾಡಿ.
No comments:
Post a Comment