ಯಾರಿಗಿಲ್ಲಿ
ಯಾರ ಬೆಂಬಲ,
ಎಲ್ಲರಲ್ಲಿಯೂ
ಬರೀ ಸ್ವಾರ್ಥ ಹಂಬಲ.
ವಾಸ್ತವದ
ಅರಿವಿಲ್ಲದವರದ್ದೂ ಚೀರಾಟ,
ಇದೇ ಅಲ್ವೇ
ಅಪ್ರಯೋಜಕ ಹೋರಾಟ.
ಹೊಸತನಕ್ಕೊಗ್ಗಿಕೊಳ್ಳುವ
ಗುಣ ನಮ್ಮಲ್ಲಿದ್ದರೆ ಮಾತ್ರ,
ಸಮಾಜದಲ್ಲಿ
ಅಪೇಕ್ಷಿಸಬಹುದು ಅಭಿವೃದ್ಧಿ ಸಸೂತ್ರ.
ಕುತಂತ್ರ
ಬಿಟ್ಟು ಬೆಂಬಲಿಸಿ ಯೋಗ್ಯ ಪ್ರಧಾನಿ ಅಭ್ಯರ್ಥಿಯನ್ನು,
ಅತಂತ್ರದಲ್ಲಿರಲಿಷ್ಟವಿದ್ದರೆ
ಬೆಂಬಲಿಸಬಹುದು ಕೂಡ ಅಯೋಗ್ಯರನ್ನು.
- ಹರ್ಷ ಹೆಮ್ಮಾಡಿ.
No comments:
Post a Comment