ನೆತ್ತಿಗೇರದಿರಲಿ ಅಹಂ
ಎನ್ನುವ ಪಿತ್ತ,
ಕಳೆದುಕೊಳ್ಳದೇ ಬದುಕು ನೀ
ಮಾನವನೆಂಬ ಚಿತ್ತ.
ದ್ವೇಷದ ಕಿಡಿಕಾರಿಕೊಂಡು
ಸಾಗುವೆ ನೀ ಎತ್ತ,
ದಯೆಯಿರಲಿ ಕಂಗಳಲ್ಲಿ
ಎಲ್ಲರಿರುವರು ನಿನ್ನ ಸುತ್ತ.
ಜಗತ್ತು ಸುಲಭವಿಲ್ಲ
ಇಲ್ಲಿರುವುದು ಹಲವು ಹಾವಿನ ಹುತ್ತ,
ತುತ್ತು ಗಿಟ್ಟಿಸಿಕೊಳ್ಳಲು
ನೀ ಬೆಳಿಬೇಕು ಇಲ್ಲಿ ಪ್ರೀತಿಯೆಂಬ ಭತ್ತ.
ಗರ್ವದಿಂದ ಮೆರೆದಾಡಿದ
ಅದೆಷ್ಟೋ ಮನುಷ್ಯ ಇಲ್ಲಿ ಹುಟ್ಟಿ ಸತ್ತ,
ಸ್ವಾರ್ಥವಿಲ್ಲದೆ ಬದುಕು
ಸಾಯುವಾಗ ಹೊತ್ತೋಗಲು ಸಾಧ್ಯವೇ ನಾವು ಮಾಡುವ ಸ್ವತ್ತ.
- ಹರ್ಷ ಹೆಮ್ಮಾಡಿ.
No comments:
Post a Comment