ಸೋಲು ಗೆಲುವು
ಹಂಚಿಕೊಳ್ಳುತ್ತೇನೆಂದು ಬಂದವಳು,
ನನ್ನ ಸಿಟ್ಟಿಗೆ
ಸೋತು ಅಂಚೆ ವಿಳಾಸವೂ ಹೇಳದೇ ಹೊರಟಳು.
ಸಂತೆ ಮುಗಿದಮೇಲೆ
ಖಾಲಿ ಬೀದಿಯಲ್ಲಿ ಒಬ್ಬನೇ ಕುಳಿತಂತೆ ಭಾಸ,
ಅಲ್ಲಿ ಉಳಿದಿರುವ ಪ್ರಾಣಿಪಕ್ಷಿಗಳೇ ನನಗೀಗ
ಆದಂತೆ ಖಾಸ.
ಊರೇ ಮುಳುಗಿದರೂ
ನಾ ಬದಲಿಸೋಲ್ಲ ನನ್ನ ಸ್ವಭಾವ,
ನನಗೆಂದೂ ಕಾಡುವುದಿಲ್ಲ ಆತ್ಮಸ್ಥೈರ್ಯದ ಅಭಾವ.
ನಾನಾಡಬೇಕಾದ
ಮಾತಿನ್ನು ಒಂದೂ ಉಳಿದಿಲ್ಲ,
ಬರದೇ ಇರು
ಮತ್ತೊಮ್ಮೆ ಆ ಪ್ರೀತಿಯೂ ನಿನಗಿನ್ನು ಸಿಗುವುದಿಲ್ಲ.
- ಹರ್ಷ ಹೆಮ್ಮಾಡಿ.
No comments:
Post a Comment