ಯಾಕಾಯ್ತೋ ಗೊತ್ತಿಲ್ಲ ಇಲ್ಲಿ
ನಮ್ಮಲ್ಲೆರ ಜನನ,
ಆದರೆ ಏನಾದ್ರೂ ಮಾಡ್ಬೇಕು
ಆಗೋದ್ರೊಳಗೆ ಮರಣ.
ಹುಟ್ಟಿನಿಂದ ಸಾಯೋವರೆಗೂ
ಸ್ವಾರ್ಥ ಬಿಡಲ್ಲ ಈ ಜನ,
ಎಷ್ಟೆಷ್ಟೋ ಕೂಡಿಡ್ತೀವಿ
ಅದರಿಂದಾಗ್ಬೇಕು ಪ್ರಯೋಜನ.
ಹೋದಮೇಲೂ ಉಸಿರು
ಹಸಿರಾಗಿರಬೇಕಾದರೆ ಹೆಸರು,
ದಾನಿಯಾಗು ತುಂಬಬಹುದು
ಅದೆಷ್ಟೋ ಹಸಿದ ಬಸಿರು.
ಹುಟ್ಟು ಇಲ್ಲಿಗೆ
ಉಪಯೋಗವಾದರೆ ಅದಕ್ಕೊಂದು ಅರ್ಥ,
ಹಾಗೇ ಹುಟ್ಟಿ ಹೀಗೇ ಸತ್ತರೇ
ಅದು ಕೇವಲ ವ್ಯರ್ಥ.
- ಹರ್ಷ ಹೆಮ್ಮಾಡಿ.
No comments:
Post a Comment