Thursday 14 November 2013

ಪಂಚೇಂದ್ರಿಯ

ಕುರುಡು ನಾನು ಅಂದುಕೊಂಡಿದ್ದೆ ನೀ ನನ್ನ ಕಣ್ಣು,
ಕೊರಡು ನೀನು ತಿನ್ನಿಸಿದೆಯಲ್ಲೇ ನನಗೆ ಮಣ್ಣು.

ಕಣ್ಣಿರಲಿ ನಾಸಿಕವೂ ಗ್ರಹಿಸಲಿಲ್ಲ ನಿನ್ನ ಕಪಟದ ಗಂಧ,
ಚುಂಬಿಸಿದಾಗಲೂ ರುಚಿಸಲಿಲ್ಲ ನಾಲಿಗೆಯ ಸುಳ್ಳಿನ ಬಂಧ.

ನಿನ್ನ ಸುಳ್ಳುನುಡಿಗಳನ್ನು ಸೂಳ್ನುಡಿಗಳಂತೆ ಭಾವಿಸಿತ್ತಂದು ನನ್ನ ಕಿವಿ,
ಅಂದು ಸುಳ್ಳೆಂದು ಗೊತ್ತಿದ್ದಿದ್ದರೆ ಇಂದು ನಾನಾಗುತ್ತಿರಲಿಲ್ಲವೇನೋ ಕವಿ.

ಅಂದು ನನಗೆ ತುಂಬಾ ಮೃದುವಾಗಿತ್ತು ನಿನ್ನ ಒರಟು ಸ್ಪರ್ಷ,
ಪಂಚೇಂದ್ರಿಯಗಳೇ ನಿಷ್ಕ್ರಿಯೆಗೊಂಡು ಮೋಸಹೋದ ಈ ಹರ್ಷ.


- ಹರ್ಷ ಹೆಮ್ಮಾಡಿ.

No comments:

Post a Comment