Wednesday 26 March 2014

ಏಳಿಗೆ

ನಿನ್ನ ಕೈಯಲ್ಲಿದೆ ನಿನ್ನ ಏಳಿಗೆ,
ನೀನೇ ಹೊಣೆ ನಿನ್ನ ಬಾಳಿಗೆ.

ಕಬ್ಬಿಣವೂ ಬಾಗುವುದು ಇದ್ದಾಗ ಕಾವು,
ನಿನ್ನ ಅಂಜಿಕೆಯೇ ನಿಜವಾದ ಸಾವು.

ನಿನ್ನನ್ನು ಏಳಿಸುವವರು ಯಾರೂ ಇಲ್ಲ,
ಬೀಳಿಸುವವರೇ ಜಾಸ್ತಿ ಇಲ್ಲಿ ಎಲ್ಲಾ.

ದೃಢ ಮನಸ್ಸಿದ್ದರೆ ಎಲ್ಲವೂ ಸಾಧ್ಯ,
ಚಂಚಲ ಮನಸ್ಸಿಗೆ ಎಲ್ಲವೂ ಅಸಾಧ್ಯ.


- ಹರ್ಷ ಹೆಮ್ಮಾಡಿ.

No comments:

Post a Comment