ಗುರಿಯಿಲ್ಲದೇ ಹಾಕಬಾರದು ಅಡಿಪಾಯ,
ಅಂತಹ ಯೋಜನೆಗೆ ತಪ್ಪಿದ್ದಲ್ಲ ಅಪಾಯ.
ತಲೆನೋವನ್ನು ತರಬಹುದು ಕಾತುರತೆ,
ಆದರೆ ತಲೆಯನ್ನೇ ತೆಗೆಯಬಹುದು ಆತುರತೆ.
ಎಲ್ಲರ ಬದುಕಿನಲ್ಲೂ ಏಳು ಬೀಳು ಸಹಜ,
ಕಾಲಿಯೇ ಅಲ್ಲವೇ ತುಂಬುವ ಮೊದಲು ಕಣಜ.
ಎಲ್ಲಾದಕ್ಕೂ ಕೂಡಿಬರಬೇಕು ಅವಧಿ,
ಆಗಿಯೇ ಆಗುತ್ತದೆ ಏನಿದೆಯೋ ಆ ವಿಧಿ.
- ಹರ್ಷ ಹೆಮ್ಮಾಡಿ.
No comments:
Post a Comment