ರಂಗುರಂಗಿನ ರಂಗವಲ್ಲಿ ಹಂಗಿಲ್ಲದ ಬದುಕಿನಲ್ಲಿ,
ರಂಗಿಲ್ಲದ ಮದರಂಗಿ ಹಂಗಿನಡಿ ಬದುಕಿದಲ್ಲಿ.
ಒಲಿಯುವುದು ಜಯದಮಾಲೆ ಏಕಚಿತ್ತನಿಗೆ,
ಎರಗುವುದು ಬೆಟ್ಟ ತಲೆಮೇಲೆ ಚಿತ್ತಚಂಚಲನಿಗೆ.
ಬರುವುದು ಬಹಳ ವಿರಳ ಅವಕಾಶ ಪದೇಪದೇ,
ಬಿಡದೇ ಬಾಚಿಕೋ ಬಂದಾಗ ತಡಮಾಡದೆ.
ಸ್ವರ್ಗ ನರಕವೆಲ್ಲಾ ಇಲ್ಲೇ ಎಂಬುದು ಸತ್ಯನುಡಿ,
ಕಪಟ ಬಗೆಯದೇ ಎಂದಿಗೂ ನ್ಯಾಯದೆಡೆಗೆ ದುಡಿ.
- ಹರ್ಷ ಹೆಮ್ಮಾಡಿ.
No comments:
Post a Comment