ನಮ್ಮ ಸಂಬಂಧ ಮುರಿದುಕೊಂಡು ಎರೆಡು ವರ್ಷ ಕಳೆದರೂ,
ನೀ ಕರೆಮಾಡಿದಾಗಲೆಲ್ಲಾ ಒದ್ದೆಯಾಗುತ್ತೆ ಕಣ್ಣು, ಬಿಗಿಗೊಳ್ಳುತ್ತೇ ಉಸಿರು.
ಯಾವ ಚೆಲುವೆಯರ ಕಣ್ಣಲ್ಲೂ ನಿನ್ನ ಕಣ್ಣಲ್ಲಿರೋ ಸೆಳೆತವಿಲ್ಲ,
ವಾಸ್ತವತೆ ಇರಲಿ ಕನಸಿನಲ್ಲೂ ನೀನೇ ನನ್ನ ಕಣ್ಣೆದುರು ಬರುವೆ,
ಅಂದು ಇಂದು ಎಂದೆಂದಿಗೂ ಗೆಳತಿ ನೀನೇ ನನ್ನ ಮನಸಿನಲ್ಲಿರುವೆ.
ಅರ್ಥವಾಗುತ್ತಿಲ್ಲ ಯಾಕೆ ನನಗೆ ಈ ಶಿಕ್ಷೆ ನನ್ನ ಮನದರಸಿ,
ಬಳಲಿ ಬೆಂಡಾಗಿರುವೆನು ದಿನವೂ ನಾ ನಿನ್ನ ಸೇರಲು ಹವಣಿಸಿ.
- ಹರ್ಷ ಹೆಮ್ಮಾಡಿ.
No comments:
Post a Comment