Saturday 14 December 2013

ಬಯಕೆ

ನೀ ಸನಿಹವಿದ್ದಾಗ ಬಾಯಿಬಿಡದೇ ನಾ ಮೂಕಾದೆ,
ನನ್ನ ಮನದ ಮಾತು ತಿಳಿಯದೇ ನೀ ದೂರಾದೆ.

ಖಾಲಿ ಮನಸ್ಸಲ್ಲಿ ನೀ ಬರೆದೇ ಬಣ್ಣ ಬಣ್ಣದ ಚಿತ್ತಾರ,
ಬಣ್ಣಗಳು ಮಾಸುವ ಮುಂಚೆ ಓಡಿ ಬಾ ನಲ್ಲೆ ಹತ್ತಿರ.

ಸಸಿ ಮನಸ್ಸು ಬೆಳೆದಿದೆ ಇಂದು ಮರದಷ್ಟು ಎತ್ತರ,
ನನ್ನ ಎದುರಿರುವ ಪ್ರಶ್ನೆಗಳಿಗೆಲ್ಲಾ ನೀನೇ ಉತ್ತರ.

ತುಂಬಾ ಮಾತನಾಡುವ ಬಯಕೆ ಮೂಡಿದೆ ಇಂದು,
ಈಗನಿಸುತ್ತಿದೆ ನಾನಂದು ತಪ್ಪು ಮಾಡಿದೆಯೆಂದು.


- ಹರ್ಷ ಹೆಮ್ಮಾಡಿ.

No comments:

Post a Comment