ಯಾರು ಪರಿಪೂರ್ಣ
ಹೇಳಿ ಈ ಜಗದೊಳಗೆ,
ಮೇಲೆ ತಳುಕು
ಬಳುಕು ಬರೀ ಹುಳುಕು ಒಳಗೊಳಗೆ.
ಮೂರುದಿನದ
ಬಾಳಿಗೆ ಇಲ್ಲಸಲ್ಲದ ತಕರಾರು,
ಪ್ರತಿಯೊಂದು
ಹೆಜ್ಜೆಗೂ ನೂರಾರು ಕರಾರು.
ಯಾಕೆ ಮರುಗುವುದು
ಮಾಡಿ ನಿನ್ನೆ ನಾಳೆಯ ಚಿಂತೆ,
ಇಂದು ಖುಷಿಯಾಗಿರು
ನಿನ್ನೆ ನಾಳೆ ಕೇವಲ ಅಂತೆ ಕಂತೆ.
ಯಾರನ್ನೋ
ಮೆಚ್ಚಿಸಲು ನಾವ್ಯಾಕೆ ಒದ್ದಾಡಬೇಕು,
ಬದುಕಲು ನಮ್ಮ ಮೇಲೆ ನಮಗೆ ಗೌರವವಿದ್ದರೆ
ಸಾಕು.
- ಹರ್ಷ ಹೆಮ್ಮಾಡಿ.
No comments:
Post a Comment