ಯಾಕೆ ನಮಗಿಲ್ಲಿ
ಹುಟ್ಟುವುದು ಉಪ್ಪು ಖಾರದ ಕನಸು,
ಬಾಳು ಮತ್ಯಾಕಿಷ್ಟೊಂದು
ಸಪ್ಪೆ ಅದಾಗದಿದ್ದಾಗ ನನಸು.
ಈ ಬಾಳೆಂಬ
ಅಡುಗೆಯನ್ನು ನಾವು ಮಾಡ್ತಿರೋದೇ ತಪ್ಪೇ,
ಎಷ್ಟು ಜಾಗ್ರತೆವಹಿಸಿದರೂ
ಎಲ್ಲೋ ಒಂದ್ಕಡೆ ಉಪ್ಪುಸಪ್ಪೆ.
ಯಾವ ಒಗ್ಗರಣೆ
ಹಾಕಿ ಎಷ್ಟು ಘಮಘಮಿಸಿದರೇನು,
ಉಪ್ಪೇ ಸರಿಯಿಲ್ಲವೆಂದಮೇಲೆ ಆ ಅಡುಗೆಗರ್ಥವೇನು.
ಯಾರಿಗೆ ಬೇಕು
ಉಪ್ಪೇ ಇಲ್ಲದ ಮ್ರಷ್ಟಾನ್ನ,
ಸಾಕಲ್ಲವೇ
ಉಪ್ಪು ಖಾರ ಸರಿಯಿರುವ ಚಿತ್ರಾನ್ನ.
- ಹರ್ಷ ಹೆಮ್ಮಾಡಿ.
No comments:
Post a Comment