Sunday 20 October 2013

ಉಪ್ಪು

ಯಾಕೆ ನಮಗಿಲ್ಲಿ ಹುಟ್ಟುವುದು ಉಪ್ಪು ಖಾರದ ಕನಸು,
ಬಾಳು ಮತ್ಯಾಕಿಷ್ಟೊಂದು ಸಪ್ಪೆ ಅದಾಗದಿದ್ದಾಗ ನನಸು.

ಈ ಬಾಳೆಂಬ ಅಡುಗೆಯನ್ನು ನಾವು ಮಾಡ್ತಿರೋದೇ ತಪ್ಪೇ,
ಎಷ್ಟು ಜಾಗ್ರತೆವಹಿಸಿದರೂ ಎಲ್ಲೋ ಒಂದ್ಕಡೆ ಉಪ್ಪುಸಪ್ಪೆ.

ಯಾವ ಒಗ್ಗರಣೆ ಹಾಕಿ ಎಷ್ಟು ಘಮಘಮಿಸಿದರೇನು,
ಉಪ್ಪೇ ಸರಿಯಿಲ್ಲವೆಂದಮೇಲೆ ಆ ಅಡುಗೆಗರ್ಥವೇನು.

ಯಾರಿಗೆ ಬೇಕು ಉಪ್ಪೇ ಇಲ್ಲದ ಮ್ರಷ್ಟಾನ್ನ,
ಸಾಕಲ್ಲವೇ ಉಪ್ಪು ಖಾರ ಸರಿಯಿರುವ ಚಿತ್ರಾನ್ನ.


- ಹರ್ಷ ಹೆಮ್ಮಾಡಿ.

No comments:

Post a Comment