ತನ್ನಷ್ಟಕ್ಕೆ ತಾನು ಎತ್ತಲೋ ಹೊರಟಿದ್ದ ಆ ದುಂಬಿ,
ಕಂಡಿತೊಂದು ಮಲ್ಲಿಗೆಯನ್ನು ಅದಾಗಷ್ಟೇ ಅರಳಿತ್ತು ಮೈತುಂಬಿ.
ಎಂದೂ ಇರದ ಕಾಂತಿಯಿಂದ ಕೂಡಿತ್ತು ಅಂದು ಆ ಮಲ್ಲಿಗೆ,
ಕಾಂತಿಯ ಭ್ರಾಂತಿಯಿಂದ ದುಂಬಿ ಬಂದು ಕೂತಿತು ಮೆಲ್ಲಗೆ.
ಮಲ್ಲಿಗೆಯ ಸಾಂಗತ್ಯದಲ್ಲಿ ದುಂಬಿ ತನ್ನ ಮೈಮರೆತಿತ್ತು,
ಮಲ್ಲಿಗೆ ಮತ್ತು ದುಂಬಿಯ ಜೀವ ಹೂ ಕಿತ್ತವನ ಕೈಯಲ್ಲಿತ್ತು.
ಅಂತ್ಯ ಹೀಗಿರುತ್ತದೆಂದು ಹೇಗೆ ತಾನೇ ತಿಳಿದಿರಬೇಕು ದುಂಬಿಗಾಗಲಿ,
ಬದುಕುಳಿಯತಿತ್ತೇನೋ ಹೋಗಿದ್ದರೆ ದುಂಬಿ ಮಲ್ಲಿಗೆಯನ್ನಗಲಿ.
- ಹರ್ಷ ಹೆಮ್ಮಾಡಿ.
No comments:
Post a Comment